Posts

Showing posts from June, 2009

"ನೆಮ್ಮದಿಯ ನೆಲೆ"

ಕಡ ತಂದು ಖಾರ ಅರೆದ ಕೈ ಕರುಳ ಕುಡಿಗೆ ತುತ್ತು ನೀಡಿತ್ತು, ಕೂಲಿ ಮಾಡಿ ಕಾಸು ತಂದ ಮೈ ಮಾಗಿ ಮರುಗಿತ್ತು, ಕಡು ಬಡತನಕೆ ಆಸರೆ ಅಂದು ದೊರೆತಿತ್ತು, ಅದು.., ಕಷ್ಟವನರಿತ ಮಕ್ಕಳ ಭವಿತವ್ಯಕ್ಕೊಂದು ರೂಪು ನೀಡಿತ್ತು, ಕಾಸು ಕಂಡ ಜೀವ ಈಗ ತೊದಲಿತ್ತು, ಬಡತನದಲ್ಲೇ ನೆಮ್ಮದಿ ನೆಲೆಸಿತ್ತು. ಕಾರಣ ಕುರುಡು ಕಾಂಚಾಣ ಕುಣಿದಿತ್ತು.

ಪರಿ(ತಪಿ)ತಪ್ಪಿಸಿದವಳು..!

ಕುಡಿನೋಟದಿ ಕೆನ್ನೆ ಕೆಂಪಾಗಿಸಿದವಳು... ಮೃದು ಮಾತಲ್ಲೇ ಮನವ ಕದ್ದವಳು... ಪ್ರೀತಿಯ ಪರಿ ಏನೆಂದು ಅರಿಯದವಳು... ಸಜ್ಜನಿಕೆಯ ನಾಟ್ಯ ಮೆರೆದವಳು... ತನು ಜಾರಿ ಸೆರಗಲ್ಲಿ ಬಿಗಿದವಳು... ತುಸು ಹೆಚ್ಚೇ ಕನಸಿಗೆ ಕದ್ದೊಯ್ದವಳು... ಬಿಗುಮಾನದ ಬಿಂಕ ಬಿಡದವಳು... ಚೆಲುವೆ, ಅವಳು.. ನನ್ನವಳು, ಪ್ರೇಮದ ಸಿರಿಯವಳು.

ಕಾಡಿದವಳು..!

Image
ಒಲವ ಹಂಬಲಿಸಿ ತಾರುಣ್ಯ ಮೆರೆದವಳ ಕುಡಿನೋಟಕೆ ಮತ್ತೆ ಕಾದು ಕುಳಿತ ಮನ ತಪ್ಪಿಯೂ ಊಹಿಸಲಿಲ್ಲ... ಅವಳು ಅಷ್ಟು ಕಾಡುತ್ತಾಳೆಂದು, ತುಸು ಒಲ್ಲೆನೆಂದರೂ.. ತನು ತಾಳೆ ಹಾಕಿ ಹೇಳುತ್ತಿದೆ, ಅವಳು... ಮತ್ತೆ... ಮತ್ತೆ ನಿನ್ನನ್ನೇ ನೋಡುತ್ತಿರುವಳೆಂದು.