ಸಾಯಲೆಂದೇ ಭೂಮಿಗೆ ಬಂದವರು 

ಸಾಯಲೆಂದೇ ಭೂಮಿಗೆ ಬಂದವರು
ಸಾವು ಕಟ್ಟಿಕೊಂಡು ನೊಂದರು
ಬದುಕಲಿ ಭ್ರಮಿಸಿ ನಿಂದವರು
ಭಂದರೆಂದು ಬೈಸಿಕೊಂಡರು
ಕಟ್ಟುಪಾಡುಗಳಿಗೆ ಹೆದರಿದವರು
ಹುಟ್ಟಿನ ಮರ್ಮ ಅರಿಯದಾದರು
ಮತಿಸಿ ಮನಶಾಂತಿ ಕಂಡವರು
ಮತ್ತೊಬ್ಬರ ಮನಕೆ ನಿಲುಕದಾದರು
ಸಮ್ಮತಿಸಿ ಸಂಭೋಗಿಸಿದವರು
ಸದ್ಭಾವನೆಯೇ ಪ್ರೀತಿ ಎಂದರು

ಇದ ಕಾರಣ ಅರಿಯದವರು

ತಲೆಕೆಡಿಸಿಕೊಳ್ಳದೆ ಸುಮ್ಮನಾದರು

ಸಾವಲ್ಲಿ

ಸುಮ್ಮನಾದರು.

Comments

Popular posts from this blog

ಮನದ ಮುಂಜಾವು